ಒಳ್ಳೆಯದೇನೋ... !

ಸಂಭಾವಿತ-ಅಪರೂಪದ ಪ್ರತಿಭೆ ಮಂಡ್ಯ ನಟನಾ ರಮೇಶ್ ಅವರ ಮೇಲೆ  ಬಂದಿರುವ ಅಪವಾದ- ಆರೋಪ  ಹೆಚ್ಚು  ಬೇಸರ ತಂದಿದೆ . .  ಈ ಸಿಕ್ಕಿನಿಂದ ಹೊರಬರಲಿ ರಮೇಶ್ ಎನ್ನುವ ಹಾರೈಕೆ ..
Image result for red flower images
ಕಳೆದವಾರದ  ಕನ್ನಡ ಬಿಗ್ಬಾಸ್ ಅಯ್ಯಪ್ಪ, ಯಪ್ಪಾ ಎನ್ನುವಂತೆ ಇತ್ತು. ಆ ವಾರದಲ್ಲಿ ಸಂಯುಕ್ತ ಹಾಗೂ ಸಮೀರ ಇಬ್ಬರೂ ಹೆಚ್ಚಿನ ಸುದ್ದಿಯಾದರು. ಸಂಯುಕ್ತ ಸಮೀರ್ನ ಮೇಲೆ ಕೈ ಮಾಡಿದ್ದು ಎಂದಿಗೂ ಕ್ಷಮಿಸುವಂತಹದ್ದು ಅಲ್ಲವೇ ಅಲ್ಲ. ಬಿಗ್ ಬಾಸ್ ಮನೆಗೆ ಬರುವ ಮುಂಚೆ ಸಮೀರನ ಕಡೆಗೆ ತನ್ನ ಗಮನ ಹಾಗೆನ್ನುವುದಕ್ಕಿಂತಲೂ ಟಾರ್ಗೆಟ್ ಸಮೀರ್ ಎನ್ನುವಂತೆ ಇತ್ತು ಆಕೆಯ ವರ್ತನೆ. ಅದರ ಪರಿಣಾಮವೇ ಇಂತಹ ಒಂದು ಘೋರ ತಪ್ಪು ನಡೆಯಲು ಕಾರಣೀಭೂತವಾಗಿದ್ದು  ಎಂದೇ ಹೇಳ ಬಹುದು. ಈಗ ಆ ಸಂಗತಿ ಪಕ್ಕಕ್ಕೆ ಇಡೋಣ, ಓವರ್ ಟು ಬಿಬಾ  3 ಮತ್ತು  ಬಿಬಾ 4. ಆ ಸೀಸನ್ ಗಳಲ್ಲಿ ಒಬ್ಬ ವ್ಯಕ್ತಿಯು ಇಬ್ಬರ ಮೇಲೆ ದಾಳಿ ಮಾಡಿ ಹೊಡೆದರೂ ಆತ ಮಾಧ್ಯಮಗಳ ಮುದ್ದು ಆಗಿದ್ದಾರೆ. ಅವರು ನನ್ ಅದರ ದೆನ್ ಹುಚ್ಚ ವೆಂಕಟ್ . ಆತ  ಬೇರೆ ಬೇರೆ ಸೀಸನ್ ಗಳಲ್ಲಿ ಬೇರೆ ಬೇರೆ ಸ್ಫರ್ಧಿಗಳ ಮೇಲೆ ಕೈ ಮಾಡಿದರೂ ಸಹಿತ ಆತ ಅಮಾಯಕ ,ಹಾಗೆ ಹೀಗೆ ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದು ಹೊಗಳುವ ಮಂದಿಗೇನು ಕಡಿಮೆ ಇಲ್ಲ. ಈಗಲೂ ಟಿವಿಯವರು ಕರೆದು, ಕುಳ್ಳರಿಸಿ ಆತನ ಹುಚ್ಚಾಟಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಖೇದಕರ.
ಮತ್ತೆ ಸಂಯುಕ್ತ ಕಡೆಗೆ ಬರುವುದಾದರೆ ಸಮೀರನ ಮೇಲೆ ಕೈ ಮಾಡಿದ ಬಳಿಕ ಆಕೆ ಸುದ್ದಿಯಲ್ಲಿ ಇರುವುದು   ಟ್ರೋಲ್ಗಳ ಮೂಲಕ , ಸಾಮಾಜಿಕ ಜಾಲತಾಣಗಳ ಕೆಟ್ಟ ಕೆಟ್ಟ ಅಭಿಪ್ರಾಯಗಳ ಮುಖಾಂತರ. ತುಂಬಾ ವಿಷಾದ ಎಂದು ಅನ್ನಿಸುತ್ತದೆ ಅಂತಹವುಗಳನ್ನು ಕಂಡಾಗ ಮತ್ತು ಓದಿದಾಗ. ಆಕೆ ಮಾಡಿದ್ದು ಅಕ್ಷಮ್ಯ, ಆದರೆ ಹುಚ್ಚ ವೆಂಕಟ್  ಮಾಡಿದ್ದು?
ನನ್ನ ಪ್ರಕಾರ ಆ ಹುಡುಗಿ ಕೆಲವೊಂದು ವಿಷಯಗಳ  ಬಗ್ಗೆ ಪೂರ್ವಾಗ್ರಹಪೀಡಿತಳಾಗಿದ್ದಾಳೆ. ತುಂಬಾ ಬೋಲ್ಡ್, ಯಾರಿಗೂ ಕೇರ್ ಮಾಡಲ್ಲ ಎಂದು ಓಡಾಡುವ-ಹೇಳಿಕೊಳ್ಳುವವರು ಹೆಚ್ಚು  ಭಾವುಕರಾಗಿರುತ್ತಾರೆ. ಆದರೆ ಅವರ ಭಾವನೆಗಳಿಗೆ ಸಮಾಜದಲ್ಲಿ ಎಂದಿಗೂ ಬೆಲೆ ಇರಲ್ಲ. ಸಂಯುಕ್ತಗೆ ತಜ್ಞರಿಂದ ಕೌನ್ಸಿಲಿಂಗ್ ಆಗಬೇಕು. ತುಂಬಾ ಚಿಕ್ಕ ಹುಡುಗಿ, ಈರೀತಿಯ ಅತಿಯಾದ ಬೋಲ್ಡ್ ಒಳ್ಳೆಯದಲ್ಲ. ಕಾಲಕ್ರಮದಲ್ಲಿ ಆಕೆಯನ್ನು ಬಾವಿಗೆ ಬಿಟ್ಟು ಆಳ ನೋಡುವ ಮಂದಿ ಹೆಚ್ಚಾಗುತ್ತಾರೆ. ಅದನ್ನು ಅರಿತು ಮುನ್ನಡೆದರೆ ಭವಿಷ್ಯದಲ್ಲಿ  ಒಳ್ಳೆಯದು.ಆಕೆಗೆ ಮತ್ತೊಮ್ಮೆ ಬಿಬಾ ಮನೆಗೆ ಹೋಗಲು ಅವಕಾಶ ನೀಡಿದರೆ ಒಳ್ಳೆಯದೇನೋ... !
Image result for red flower images
@ಬಿಬಾ   ಅದ್ಯಾಕೋ ನಿಂತ ನೀರಿನ ಥರ ಆಗ್ತಾ ಇದೆ. ಥ್ರಿಲ್ ಕಡಿಮೆ ಆಗಲು ಮುಖ್ಯ ಕಾರಣ ಜೆಕೆ ಜಾಸ್ತಿ ಆದ್ಯತೆ ಕೊಡ್ತಾ ಇರೋದು. ಆತನ ಕಡೆಗೆ ತಮ್ಮ ಗಮನ ಕೇಂದ್ರೀಕೃತ ಮಾಡಿ ತಮ್ಮ ಒರಿಜಿನಾಲಿಟಿಯನ್ನು ಕಡೆಗಣನೆ ಮಾಡಿರುವ ಟಿವಿ-ಸಿನಿಮಾ ಹೆಣ್ಣುಮಕ್ಕಳು. ಸದಾ ಇವರ ಟಾರ್ಗೆಟ್ ಸಮೀರ್ ಅನ್ನುವ ಸಂಗತಿ ಸಹ ಅಷ್ಟೇನೂ ಇಷ್ಟ ಆಗಲ್ಲ. ಒಂದು ಬಾರಿಯಾದರೂ ಅವರು ಜೆಕೆಯನ್ನು ನಾಮಿನೇಟ್ ಮಾಡಿದ್ದಿದ್ದರೆ ವೀಕ್ಷಕರಿಗೆ ಹೆಚ್ಚು ಇಷ್ಟ ಆಗ್ತಾ ಇದ್ರೂ. ನಾನು ಜೆಕೆ ಅವರ ದ್ವೇಷಿಯಲ್ಲ, ಆದರೆ ಬಿಬಾದಲ್ಲಿ  ಕಾಮನರ್ಸ್  ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಲ್ಲಿ ಅರ್ಧದಷ್ಟು ಸಹ ಈತ ತನ್ನನ್ನು ತಾನು ತೊಡಗಿಸಿಕೊಂಡಿಲ್ಲ ( ನಾವು ವೀಕ್ಷಿಸುವ ಒಂದು-ಒಂದೂವರೆ  ಕಾಲಾವಧಿಯಲ್ಲಿ ಕಂಡು ಬಂದ- ಗೋಚರಿಸಿದ ಅಂಶಗಳ ಬಗ್ಗೆ ಮಾತ್ರ ನಾನು ಹೇಳ್ತಾ ಇರೋದು).ನಿವೇದಿತಾ ಟಾಸ್ಕ್ ವಿಷಯದಲ್ಲಿ ಸರಿಯಾದ ಭಾವಹಿಸುವಿಕೆ ಇಲ್ಲ. ಟಾಸ್ಕ್ ಮಾತ್ರವಲ್ಲ ಕೆಲಸಗಳನ್ನು  ಸಹ ಆಕೆ ಮಾಡೋದು ಕಡಿಮೆ ಅಂತ ಪ್ರತಿಬಾರಿ ಜೆಕೆ ಹೇಳ್ತಾ ಇರ್ತಾರೆ . ಪಾಪ ಅವರ ನೋವು ಬಿಗ್ಬಾಸ್ಗೆ ಅರ್ಥ ಆಗಿಲ್ಲ.  ಆಕೇನೂ ಜಾಣೆ ವಾರವಿಡೀ ಉಲ್ಲಾಸವಾಗಿದ್ರು ಶುಕ್ರವಾದಂದು ಡಲ್ ಆಗಿ ಅತ್ತೆ ಬಿಡ್ತಾಳೆ ತಾನೆಲ್ಲಿ ಎವಿಕ್ಟ್ ಆಕ್ತಿನೋ ಅಂತ.  ಇರ್ಲಿ ಆ ವಿಷ್ಯ ನನಗೆ ಬೇಡ..
ಕಿಚ್ಚ ಸುದೀಪಾ ಹೊಸ ಡಸೆರ್ಟ್ ಕಲಿತಂಗೆ ಆಯ್ತು..ಆದರೆ ಎಗ್ಗು, ಚೀಸು ಇಲ್ಲದೆ ಸೊಪ್ಪು ಸದೆ ಹಾಕಿ ಅಡುಗೆ ಮಾಡೋಕೆ ಬರುತ್ತಾ ಎನ್ನುವ ಸಂದೇಹ ನಮಗಿದೆ..ಈ ನಮ್ಮ   ಡೌಟ್ ದೂರ ಮಾಡ್ರಲಾ ಮಿತ್ರ :-)

No comments: