ಪಾಪ!

 




ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶ್ರೀ ರಸ್ತು ಶುಭ ಮಸ್ತು ಧಾರಾವಾಹಿಯ ಎಲ್ಲಾ ಪಾತ್ರಗಳು ಚೆನ್ನಾಗಿವೆ. ಹಾಗೆ ಹೇಳುವುದಕ್ಕಿಂತ ಕಲಾವಿದರು ಅತ್ಯಂತ ಸುಂದರವಾಗಿ ನಟಿಸಿದ್ದಾರೆ. ತುಳಸಿ , ಮಾಧವ, ಅವರ ಮಕ್ಕಳು, ಶ್ರಾವಣಿ ಆಕೆಯ ಮಗಳ ಪಾತ್ರಧಾರಿ ಜೊತೆಗೆ ಸಹಾಯಕರಾಗಿ ಕೆಲಸ ಮಾಡುತ್ತಿರುವವರು ಎಲ್ಲರು ನಟಿಸಿದ್ದಾರೆ ಇಷ್ಟ ಆಗುವಂತೆ. .. ದತ್ತ  ಮತ್ತು  ಅವರ ಮೊಮ್ಮಗಳ  ಪಾತ್ರ ಸ್ವಲ್ಪ ಜಾಸ್ತಿ ಅನ್ನಿಸಿದರೂ ದತ್ತನಂತಹ ಹಿರಿಯರು ಮನೆಯಲ್ಲಿ ಇದ್ದರೆ ಸಮಸ್ಯೆಗಳ ಪರಿಹಾರ ತ್ರಾಸ ವಿಲ್ಲದೆ  ಆಗುತ್ತದೆ. ಆದರೆ  ಒಂದು ಸಂಗತಿ ಅಸಹಜ ಅನ್ನಿಸಿರುವುದು ಎಂದರೆ ಕಥೆ ಮತ್ತು ಕಥೆ.....! ಸಿನಿಮಾ ಕಥೆ ಯಂತೆ ಧಾರಾವಾಹಿ ಸಾಗಿದೆ. ತುಳಸಿ ಮತ್ತು ಮಾಧವ ಮಾಡುವೆ ಇಷ್ಟು ತರಾತುರಿ ಯಲ್ಲಿ ಆಗಿರುವುದು   ಮತ್ತು ಮುಖ್ಯವಾಗಿ ಅವರಿಬ್ಬರೂ ಮಾಡುವೆ ಆಗಿರೋದೇ ಅಸಹಜ ಅಂಶ.ಜೊತೆಗೆ ಶ್ರಾವಣಿ ಮಾಡುವ ಅನ್ಯಾಯ.. ಇಷ್ಟೆಲ್ಲ ಆಳವಾಗಿ ನೋಡ್ತೀನಾ ಎಂದುಕೊಳ್ಳಬೇಡಿ.. ವೀಕ್ಷಕ ರು  ಹೆಚ್ಚು ಸೂಕ್ಷ್ಮವಾಗಿ ಗಮನಿಸುತ್ತಾರೆ ಸಣ್ಣಪುಟ್ಟ ಅಂಶ. ....! ಇನ್ನಾದ್ರೂ  ಶ್ರಾವಣಿ ಗಂಡ ನಡೆದು ಮಾತಾಡೋ ಹಾಗೆ ಮಾಡ್ರಿ ಪಾಪ!


No comments: