ಸಿಗುತ್ತಾ ?!

 


ಕೋವಿಡ್  ಸಮಯದಲ್ಲಿ ವಾರ್ತಾ ವಾಹಿನಿಗಳನ್ನು ಹೆಚ್ಚು ನೋಡ್ತಾ ಇದ್ದೆ. ಸೋಷಿಯಲ್ ಮೀಡಿಯಾದಲ್ಲಿದ್ದ ಅನೇಕ ಸ್ನೇಹಿತರ ಸಾವು, ಪ್ರಪಂಚದಲ್ಲಿ ಆದ ಸಾವುಗಳು ಮನಕ್ಕೆ ಖೇದ ಉಂಟು ಮಾಡಿತ್ತು. ಆದ ಕಾರಣ ಆದಷ್ಟು ಮನಕ್ಕೆ ಬೇಸರ, ನೋವು ಉಂಟಾಗುವ ವಿಷಯಗಳನ್ನು ನಾನು ವೀಕ್ಷಿಸಬಾರದು ಎಂದು ನಿರ್ಧಾರ ಮಾಡಿದ್ದೆ. ಆದರೂ ಬಹಳ ಸಮಯದ ನಂತರ ಸಾಮಾನ್ಯವಾಗಿ ವೀಕ್ಷಿಸುವ ವಾರ್ತಾ ವಾಹಿನಿಗಳನ್ನು ಹೊರೆತು ಪಡಿಸಿ ಹಾಗೆ ಪ್ರಜಾ ಮತ್ತು ರಾಜ್ ನ್ಯೂಸ್ ಕಡೆ ಬಂದೆ. ಆಯೋ ಎಂಥ ಅನ್ಯಾಯ .. !!!! ರಾಜ್ ನ್ಯೂಸ್ ನಲ್ಲಿ  beauty   ಟಿಪ್ಸ್ ಅನ್ನುವ ಕಾರ್ಯಕ್ರಮದ ಹೆಡ್ಡಿಂಗ್ ತೋರಿಸ್ತಾ ಇದ್ರೂ.. ಆದರೆ ಅಲ್ಲಿ ಪ್ರಸಾರ ಆಗ್ತಾ ಇದ್ದುದು ನ್ಯೂಸೂ... ಇನ್ನು ಪ್ರಜಾ ದಲ್ಲಿ ಸಾಂತ್ವಾನ ಅನ್ನುವ ಪ್ರೋಗ್ರಾಮ್ ಇತ್ತು ಪಟ್ಟಿಯಲ್ಲಿ ಆದರೆ ಅಲ್ಲೂ ಸಹ ಪ್ರಸಾರ ಆಗ್ತಾ ಇದ್ದುದ್ದು ನ್ಯೂಸು.. ದೇವುಡಾ ನ್ಯೂಸ್ ನೋಡುವುದರಿಂದ  ಸಾಂತ್ವಾನ ಸಿಗುತ್ತಾ ?!

No comments: