ಹಿಂಸೆ


ಯುಎಸ್ ದೇಶದಲ್ಲಿ ಮಕ್ಕಳ ಮೇಲೆ ನಡೆದ ಮಾರಣ ಹೋಮ ನಿಜಕ್ಕೂ ಅತ್ಯಂತ ದುಃಖ ಕರ ಸಂಗತಿ.ಏನೂ ಅರಿಯದ  ಆ ಕಂದಮ್ಮಗಳು ಕ್ರೂರ  ಮನಸ್ಥಿತಿ  ವ್ಯಕ್ತಿಯಿಂದ ಅಮಾನುಷವಾಗಿ ಸಾವನ್ನಪ್ಪಿದ ಘಟನೆ ಮನಕ್ಕೆ ತುಂಬಾ ನೋವು ಉಂಟು ಮಾಡಿದೆ. ಖುಷಿಯಿಂದ ಶಾಲೆಗೆ ಹೋರಾಟ ಮಕ್ಕಳು ಹೆಣವಾಗಿ ಬಂದುದನ್ನು ಕಂಡ ಆ ಪೋಷಕರ ಸ್ಥಿತಿ .. ಛೆ..! ಆ ಮೃತ ಕಂದಮ್ಮಗಳ ಆತ್ಮಕ್ಕ್ಕೆ ಶಾಂತಿ ಮತ್ತು ಅವರ ಪೋಷಕರುಗಳಿಗೆ ಧೈರ್ಯ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ ,,


ಮನಸ್ಸಿಗೆ ತುಂಬಾ ಖೇದ ಅನ್ನಿಸುತ್ತೆ ಮಕ್ಕಳ ಮೇಲೆ ನಡೆಯುವ ಹಿಂಸೆ ಕಂಡಾಗ. ಇತ್ತೀಚಿಗೆ ತಾಯಿ ತನ್ನ ಮಗುವನ್ನು ಕ್ರೂರವಾಗಿ ಹೊಡೆದ ಘಟನೆ ಪ್ರಸಾರ ಆಗಿತ್ತು.ಇಂತಹ ತಾಯಂದಿರು ಸಿಕ್ಕಾಪಟ್ಟೆ ಇದ್ದಾರೆ ಬಿಡಿ , ಇನ್ನು ಚಿತ್ರ-ವಿಚಿತ್ರ ರೀತಿಯಲ್ಲಿ ದಾಳಿ ಮಾಡ್ತಾರೆ . ಆ ಮಗುವಿನ ಸ್ಥಿತಿ ಛೆ!





ಟೀವಿ ನೈನ್  ವಾಹಿನಿಯಲ್ಲಿ ಇಂದು ನಿರೂಪಕಿ ಹೇಮಾ ಒಂದು ಕಾರ್ಯಕ್ರಮ ನಡೆಸಿಕೊಡ್ತಾ ಇದ್ರು .. ಅದು ಸಹ ಮಗುವಿನ ಮೇಲೆ ನಡೆದ ಹಿಂಸೆ ಕುರಿತಾದ ಕಾರ್ಯಕ್ರಮ. ಒಂದು ಮಗು ತನ್ನ ಪ್ರಿನ್ಸಿಪಾಲರ ಬಳಿ  ಮಾನುಷವಾಗಿ ಹೊಡೆಸಿಕೊಂಡ ವಿಷ್ಯ. ಆತ  ಆ ಮಗುವಿನ ಕಿವಿಗೆ ಅದೆಷ್ಟು ಜೋರಾಗಿ ,ಪ್ರಾಣಾಂತಿಕವಾಗಿ ಹೊಡೆದಿದ್ದಾನೆಂದರೆ ಅದರ ತಮಟೆಯಲ್ಲಿ ಗಾಯ ರಕ್ತ ಉಂಟಾಗಿದೆ.
ಶಾಲೆಯು ಇತ್ತೀಚೆಗಂತೂ ರಕ್ಷಣೆಯ ಸ್ಥಳಗಳಾಗಿಲ್ಲ  ಅನ್ನುವ ಸಂಗತಿ ಮತ್ತೊಮ್ಮೆ ದೃಢಪಟ್ಟಿದೆ. ನನಗೆ ಅನ್ನಿಸುತ್ತೆ ಇಲ್ಲಿ ಭಾಷೆಯು ಹೆಚ್ಚು ಸಮಸ್ಯೆಗೆ ಕಾರಣ ಆಗಿರ ಬಹುದು ಅಂತ. ಎಲ್ಲರಿಗೂ ಗೊತ್ತಿರುವಂತೆ ಕೃಷ್ಣರಾಜ ಪುರ , ಅಲ್ಲಿ ಸಮೀಪದಲ್ಲಿ ಇರುವ  ಸ್ಥಳಗಳಲ್ಲಿ ವಾಸಿಸುತ್ತಿರುವ ಕನ್ನಡ ಕ್ರೈಸ್ತರ ಮೇಲೆ ತಮಿಳು ಕ್ರೈಸ್ತರು ತೋರುತ್ತಿರುವ ಪ್ರತಿಭಟನೆ ಈ ರೀತಿ ಮಕ್ಕಳ ಮೇಲೆ ನಡೆಯುತ್ತಿದೆಯ.. ? ಸಂಬ೦ಧಿತರು ಇದರ ಬಗ್ಗೆ ಗಮನ ನೀಡಿದ್ದಾರೆ ಕನ್ನಡದ ಮಕ್ಕಳು ಸುರಕ್ಷಿತವಾಗಿ ಧೈರ್ಯವಾಗಿ ಶಾಲೆಗೆ  ಹೋಗ ಬಹುದೇನೋ? 

No comments: