ದುಃಖ

ನಂಗೊತ್ತು ನ0ಗೊತ್ತು ಈಗ ನಮ್ಮ ಕನ್ನಡ ವಾರ್ತಾ ವಾಹಿನಿಗಳಿಗೆ ಸಿಕ್ಕಾಪಟ್ಟೆ ದುಃಖ  ಆಗಿರುತ್ತೆ.. ಕಾರಣ ಇಷ್ಟೇ ಪ್ರಳಯ ಆಗಲೇ ಇಲ್ಲ. ಛೆ ಹಾಗೆ ಆಗಿದ್ದಿದ್ದಿದ್ದರೆ ಆಗ ಕನ್ನಡ ಚಾನೆಲ್ ಗಳು ಲೈವ್ ಕಾರ್ಯಕ್ರಮ ನಿದ್ದ್ತಾ ಇದ್ವು ವೀಕ್ಷಕರಿಗೆ .. ಸಖತ್ತಾಗಿರ್ತಾ ಇತ್ತು.. ಆದ್ರೆ ಛೆ ಹಾಗೆ ಆಗಲಿಲ್ಲ.ಇರ್ಲಿ ಬಿಡಿ ತಮಾಷೆಗೆ ನಾನು ಹೀಗೆ ಹೇಳಿದ್ದು.. 

ಆದರೂ ಒಂದು ಸಂಗತಿ ಮಾತ್ರ ನಮ್ಮ ಕನ್ನಡ ವಾರ್ತಾ ವಾಹಿನಿಗಳಿಗೆ ಗೊತ್ತಾಗಲಿಲ್ವ ಅಥವಾ ಗೊತ್ತಾದರೂ ಸುಮ್ಮನಿದ್ದರಾ ಗೊತ್ತಿಲ್ಲ? ಯಾಕೆಂದ್ರೆ ನಾವು ಪುರಾಣ ಓದುವಾಗ , ಪ್ರವಚನ ಕೇಳುವಾಗ ಪ್ರಳಯದ ಬಗ್ಗೆ ಕೇಳಿ-ಓದಿದ್ದಿವಿ .ಅದು ಸಮಯಕ್ಕೆ -ಸಂದರ್ಭಕ್ಕೆ ಮಾತ್ರ ಸರಿ ಹೊಂದೋದು. ಆದರೆ ಅದೇ ಸಂಗತಿಯನ್ನು  ಉಪಯೋಗಕ್ಕೆ ಬ್ರಹ್ಮಾಂಡ ಸ್ವಾಮಿ  ಬಳಸಿಕೊಂಡ ಪರಿ ..ಅದನ್ನು ನಂಬಿದ ಸಾಮಾನ್ಯ ಜನತೆ ಅದಕ್ಕೆ ಪುಷ್ಟಿ ಕೊಟ್ಟ ಕನ್ನಡ ಮೀಡಿಯಾಗಳು...(ಟೀ ಆರ್ಪಿ  ಗಾಗಿ ಇವೆಲ್ಲ ಅಂತೀರಾ )
ಕೃಪೆ : ಅರುಲ್ ದಾಸ್  ವಿಜಯ 
ಆಶ್ಚರ್ಯ ಅಂದ್ರೆ ಆತ  ದೊಡ್ಡ  ಕಣಿಗಲೆ-ಚಂಡು  ಹೂ ಮೀಡಿಯಾದವರ ಕಿವಿಗಿಟ್ಟರೂ ಅರ್ಥ ಮಾಡಿಕೊಳ್ಳದ ಕನ್ನಡ ಮೀಡಿಯಾ ಮಂದಿ ,  ಆತ ಹೇಳಿದ   ಪ್ರಳಯ ಆಗುತ್ತೆ ಅನ್ನುವ ಸಂಗತಿಯನ್ನು ವರ್ಷವಿಡಿ ಜೀವಂತವಾಗಿಟ್ಟಿದ್ದು ದು ಕಂಡು ಯಾವ ರೀತಿ ಪ್ರತಿಕ್ರಿಯಿಸ ಬೇಕೋ ಗೊತ್ತಾಗುತ್ತಿಲ್ಲ ಸಾಮಾನ್ಯರಿಗೆ...! 

ಆ ವಿಷಯ  ಪಕ್ಕಕ್ಕೆ ಇಡಿ.ಆದರೆ ನಿನ್ನೆ ಕನ್ನಡ ವಾಹಿನಿಗಳು ಮೋದಿ ಅವರ ಗೆಲುವಿನ-ಗುಜರಾತ್ ಚುನಾವಣೆಯ ವಿಶ್ಲೇಷಣೆ ಚೆನ್ನಾಗಿ  ನಡೆಸಿಕೊಟ್ಟ ವು . ಪಬ್ಲಿಕ್ ಟೀವಿ ರಂಗಣ್ಣ,ಶ್ಯಾಮ್ , ಸುವರ್ಣ ನ್ಯೂಸ್ ಹಮೀದ್, ರಂಗನಾಥ್,ಅಜೀತ್, ಜನಶ್ರೀ ರಮಾಕಾಂತ್, ಉದಯ ನ್ಯೂಸ್, ಟೀವಿ ನೈನ್ ಶಿವಪ್ರಕಾಶ್,... ಎಲ್ರು  ! ಸಾಕಷ್ಟು ಆಸಕ್ತಿ-ಕುತೂಹಲಕರ ಸಂಗತಿ ಆಗಿದ್ದ ಈ ಫಲಿತಾಂಶಕ್ಕೆ  ಬಂದ  ಅತಿಥಿಗಳ ದೃಷ್ಟಿಕೋನದ ಜೊತೆಗೆ ವಾಹಿನಿ ಮಂದಿಯ ಮಾತುಕತೆಗಳು ವೆರಿ ವೆರಿ ಇಂಟರೆಸ್ಟಿಂಗ್ ಆಗಿತ್ತು ಸಚ್ಚಿ!  

No comments: