ಧ್ವನಿ

ಪಬ್ಲಿಕ್ ಟೀವಿಯಲ್ಲಿ ಒಂದು ವಿಶೇಷ ಕಾರ್ಯಕ್ರಮ ಪ್ರಸಾರ ಆಗುತ್ತದೆ.ನಾನು ಎರಡು ಬಾರಿ ಮಾತ್ರ ವೀಕ್ಷಿಸಿದ್ದೇನೆ. ಸೊ ಅದು ನಿರಂತವಾಗಿ ಪ್ರಸಾರ ಆಗುವ ಕಾರ್ಯಕ್ರಮ ಹೌದೋ ಅಲ್ಲವೋ ಗೊತ್ತಿಲ್ಲ. ಇರ್ಲಿ ಬಿಡಿ ಆದರೂ ಇಷ್ಟ ಆಯ್ತು .

ಗುರು ನಾನಕ್ ಜಯಂತಿ  ಸಂದರ್ಭದಲ್ಲಿ ಗುರು ಮಂದಿರ್ ಗೆ ಹೋಗಿ ಅಲ್ಲಿನ ರೀತಿ ರಿವಾಜು ಅಲ್ಲದೆ ಅನ್ನದಾನದ ಬಗ್ಗೆ ತಿಳಿಸುತ್ತ, ಅಲ್ಲಿ ಪಂಜಾಬಿ ರೆಸಿಪಿ ವೀಕ್ಷಕರಿಗೆ ತಿಳಿಸಿ ಕೊಡುವ ಪ್ರಯತ್ನ ಮಾಡಲಾಯ್ತು.
ಅಂತಹುದೇ ಸಂಗತಿ ಹೊಂದಿರುವ ಕಾರ್ಯಕ್ರಮ ನಿನ್ನೆ ಪ್ರಸಾರ ಆಯ್ತು, ಅದರಲ್ಲಿ ಕನಕಪುರ ರಸ್ತೆಯಲ್ಲಿ ಇರುವ ರವಿ ಶಂಕರ್ ಗುರುಜಿ ಅವರ ಧ್ಯಾನ ಮಂದಿರ.

ಯೋಗ ಹೇಳಿ ಕೊಡುವ, ಪ್ರಾಣಾಯಾಮ,ಧ್ಯಾನದ ವಿಷಯದಲ್ಲಿ ರವಿಶಂಕರ್ ಗುರುಜಿ ಅವರ ಸಾಧನೆ ಅಪರೂಪದ್ದು. ಯಾಕೆಂದ್ರೆ ನಾನು ಕಂಡ೦ಗೆ ಹಳಿ ಹಳ್ಳಿಯಲ್ಲೂ ರಾಜ್ಯದ ಮೂಲೆ ಮೂಲೆಯಲ್ಲೂ ಸಹ ಇವರ ಅನುಯಾಯಿಗಳು ಸತ್ಸಂಗ, ಪ್ರಾಣಾ ಯಾಮದ ರುಚಿ ತೋರಿಸುತ್ತಿದ್ದಾರೆ ನಮ್ಮ ಊರುಗಳಲ್ಲೂ, ನನ್ನ ರಕ್ತ ಸಂಬಂಧಿಕರು ಇದರ ಉಪಯೋಗ ಪಡೆದಿದ್ದಾರೆ . ಹಳ್ಳಿಗಳಲ್ಲಿ ಇದರ ಒಂದು ಅಲೆ ಹೇಗಿದೆ ಅಂದ್ರೆ ವಾವ್! ಗುರುಜಿ ಅವರ ಈ ಸಾಧನೆ ನಿಜಕ್ಕೂ ವಂದನಾರ್ಹ.

ನಿನ್ನೆ ನಿರೂಪಕಿ ದಿವ್ಯ ನಡೆಸಿದ ಸಂದರ್ಶನದಲ್ಲಿ ರವಿಶಂಕರ್ ಗುರುಜಿ ಅವರು ದಾಸೋಹದ ಮಹತ್ವದ ಜೊತೆಗೆ ನಮ್ಮ ಹಳ್ಳಿಗಳಲ್ಲಿ ಬಳಸುವ-ಮಾಡುವ ಸಿಹಿ ತಿನಿಸುಗಳು ಜಗತ್ಪ್ರಸಿದ್ಧವಾಗ ಬೇಕು ಅನ್ನುವ ಮಾತು ನಿಜ ಅನ್ನಿಸಿತು, ಜೊತೆಗೆ ಖುಷಿ ನೀಡಿತು. 
ಕಾರ್ಯಕ್ರಮ ಪೂರ್ತಿ ನೋಡಿದೆ :-).ಹಿನ್ನಲೆ ಧ್ವನಿ ಕೊಟ್ಟ ಮಾನಸಿ ಧ್ವನಿ ಅದ್ಭುತವಾಗಿದೆ.

No comments: