ಕಳೆದ
ಕೆಲವು ದಿನಗಳಿಂದ ನಾನು ಬ್ಲಾಗ್ ಅಪ್ ಡೇಟ್ ಮಾಡೋಕೆ ಆಗೆ ಇರಲಿಲ್ಲ. ಆದರೆ ನಿರಂತರವಾಗಿ ಫೇಸ್
ಬುಕ್ ನಲ್ಲಿ ಭಾವನೆಗಳನ್ನು ಹರಿ ಬಿಡ್ತಾ ಇದ್ದೆ. ಬಿಡಿ ಅಲ್ಲೆ ಒಂದು ಪ್ರಪಂಚ. ಏಕೇಂದ್ರೆ ನನ್ನ
ಇಬ್ಬರು ಜೂನಿಯರ್ ಗಳು ಮೇಡಂ ನಮ್ಮ ಅಭಿಪ್ರಾಯ
ನಿಮ್ಮ ವಾಲ್ ನಲ್ಲಿ ಹಾಕಿ ಇಡೀ ಪ್ರಪಂಚಕ್ಕೆ ರೀಚ್ ಆಗುತ್ತೆ ಅನ್ನುವ ಮಾತು ಸದಾ ಹೇಳ್ತಾ ಇರ್ತಾರೆ.
ಅಷ್ಟೇ ಅಲ್ಲದೆ ಟ್ವಿಟ್ಟರ್ ನಿಂದಲೂ ಹೆಚ್ಚು ಖುಷಿ ಸಿಗ್ತಾ ಇತ್ತು-ಇದೆ.ಐಬಿಎನ್ , ಜೀ ನಾನು ಹೆಚ್ಚು ಫಾಲೋ ಮಾಡುವ ಸಂಸ್ಥೆಗಳು. ಹಾಗೆ ನೋಡಿದ್ರೆ ಸ್ವಲ್ಪ ಮಟ್ಟಿಗೆ ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿರುವ ಕನ್ನಡ ಚಾನೆಲ್ಗಳು ಅಂದ್ರೆ (ನಾನು ಕಂಡಂಗೆ) ರಂಗಣ್ಣನ ಪಬ್ಲಿಕ್ ಟೀವಿ, ಆಗಾಗ ಸುವರ್ಣ ನ್ಯೂಸ್.

ಅಷ್ಟೇ ಅಲ್ಲದೆ ಟ್ವಿಟ್ಟರ್ ನಿಂದಲೂ ಹೆಚ್ಚು ಖುಷಿ ಸಿಗ್ತಾ ಇತ್ತು-ಇದೆ.ಐಬಿಎನ್ , ಜೀ ನಾನು ಹೆಚ್ಚು ಫಾಲೋ ಮಾಡುವ ಸಂಸ್ಥೆಗಳು. ಹಾಗೆ ನೋಡಿದ್ರೆ ಸ್ವಲ್ಪ ಮಟ್ಟಿಗೆ ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿರುವ ಕನ್ನಡ ಚಾನೆಲ್ಗಳು ಅಂದ್ರೆ (ನಾನು ಕಂಡಂಗೆ) ರಂಗಣ್ಣನ ಪಬ್ಲಿಕ್ ಟೀವಿ, ಆಗಾಗ ಸುವರ್ಣ ನ್ಯೂಸ್.
ಆದರೂ
ಈ ಬ್ಲಾಗ್ ಅಂದ್ರೆ ನನಗೊಂದು ರೀತಿಯಲ್ಲಿ ಪ್ರೀತಿ . ಕಳೆದ ನಾಲ್ಕು ವರ್ಷಗಳಿಂದ ಇದರ ಒಡನಾಟದಲ್ಲಿ
ಇರುವ ನನಗೆ ತುಂಬಾ ತೃಪ್ತಿ ತಂದಿದೆ. ಅನೇಕ ಉತ್ತಮ ಸ್ನೇಹಗಳ ಪರಿಚಯ ಆಗಿದೆ. ಅಷ್ಟೇ ಅಲ್ಲದೇ ಕೊಳಕು ಮನಸ್ಸುಗಳ ಕಂಡಿವೆ..
ಏನೇ ಆದ್ರು ನನಗೆ ಅನ್ನಿಸಿದ್ದು ಹೇಳಲು ಉತ್ತಮ ವೇದಿಕೆಯಾಗಿದೆ.
ಈ
ತಿಂಗಳ ಹತ್ತನೆಯ ತಾರೀಕ್ ನನ್ನ ಬ್ಲಾಗ್ ಬರ್ತಡೇ ಆಯಿತು. ಅಂದು ಅದರ ಬಗ್ಗೆ ಬರೆಯದೆ ಇಂದು ಬರಿತಾ
ಇದ್ದೀನಿ. ಹ್ಯಾಪಿ ಬರ್ತಡೇ ... ಮೈ ಡಿಯರ್
ನ್ಯೂಸ್
ಚಾನೆಲ್ಗಳಲ್ಲಿ ಟೀವಿ ನೈನ್ ದೇ ಒಂದು ರೀತಿಯ ಖದರ್. ಹೊಸಬರಿಗೆ ಹೆಚ್ಚು ಅವಕಾಶ ನೀಡುವ ಚಾನೆಲ್
ಅನ್ನುವುದಕ್ಕಿಂತ ಅಂತಹವರ ಒಳ್ಳೆಯ ವೇದಿಕೆ. ನೀವು ಹೇಳಿದ್ದು ನಾವು ಕೇಳಿದ್ದು ಈ ವಾಹಿನಿಯ
ವಿಶೇಷ ಕಾರ್ಯಕ್ರಮಗಳಲ್ಲಿ ಒಂದು. ತಪ್ಪದೇ ನೋಡಿ ಎಂಜಾಯ್ ಮಾಡುವ ಕಾರ್ಯಕ್ರಮ. ಇದರಲ್ಲಿ ಮಾತುಗಳ
ಬರೆಯೋ ಹುಡುಗ ನಮ್ಮ ಶರತ್ ಚಕ್ರವರ್ತಿ . 
ನಾಟಕ-ಕವನ ಅಂತ ಇರೋ ನಮ್ಮ ಶರತ್ತು, ಅವನ-ನನ್ನ ಮಿತ್ರ ರಾಜೇಂದ್ರ ಪ್ರಸಾದ್ ಮತ್ತು ನಮ್ಮೆಲ್ಲರ ಪ್ರೀತಿಯ ಲೇಖಕ ಕು.ವೀ. ಅವರ ಮಗ ಪ್ರವರ ಈ ಮೂರು ತರಲೆಗಳು ಕವನ ಸಂಕಲನ ಬಿಡುಗಡೆ ಮಾಡ್ತಾ ಇದ್ದಾರೆ ಸದ್ಯದಲ್ಲೆ. ಇನ್ನೂ ಕರೆದಿಲ್ಲ . ಪ್ರವರ ಅಕ್ಕೋ ಬಾರಕ್ಕ ಅಂತ ಕರದೇ ಕರೀ ಬಹುದು ಅನ್ನೋ ನಂಬಿಗೆ ಬಲವಾಗಿದೆ.. ನೋಡಾಮ!
ನಾಟಕ-ಕವನ ಅಂತ ಇರೋ ನಮ್ಮ ಶರತ್ತು, ಅವನ-ನನ್ನ ಮಿತ್ರ ರಾಜೇಂದ್ರ ಪ್ರಸಾದ್ ಮತ್ತು ನಮ್ಮೆಲ್ಲರ ಪ್ರೀತಿಯ ಲೇಖಕ ಕು.ವೀ. ಅವರ ಮಗ ಪ್ರವರ ಈ ಮೂರು ತರಲೆಗಳು ಕವನ ಸಂಕಲನ ಬಿಡುಗಡೆ ಮಾಡ್ತಾ ಇದ್ದಾರೆ ಸದ್ಯದಲ್ಲೆ. ಇನ್ನೂ ಕರೆದಿಲ್ಲ . ಪ್ರವರ ಅಕ್ಕೋ ಬಾರಕ್ಕ ಅಂತ ಕರದೇ ಕರೀ ಬಹುದು ಅನ್ನೋ ನಂಬಿಗೆ ಬಲವಾಗಿದೆ.. ನೋಡಾಮ!
ಸುದ್ದಿ ಮಾಡುವ ವಿಷಯದಲ್ಲಿ ಎಡವಟ್ಟುಗಳು ಆಗೋದು ಸಹಜ.
ವಿದೇಶದಲ್ಲಿರುವ ನನ್ನ ಎಫ್ ಬಿ ಮಿತ್ರರಾದ ಪಡ್ಯಾಣ ರಾಮಚಂದ್ರ ಐಬಿಎನ್ ಲೈವ್ ನಲ್ಲಿ ಬಂದ ಸುದ್ದಿ
ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಹೀಗೆ..
ಇದಕ್ಕೆ ರಾಜ್ ದೀಪ್ ಏನನ್ನುತ್ತಾರೆ? ಲಿಂಕ್ ಇಲ್ಲಿದೆ.
http://ibnlive.in.com/news/karnataka-minister-jumps-into-lake-to-save-six-people/422964-37-64.html
18/09/2013
22:14

Personally I dont have
anything against Kimmane Rathnakar and I have high regards for him.
But, I have low regard for the news reporter
who gave the heading to this news ,as the heading and contents do not match
No comments:
Post a Comment