ಜೈ ಶ್ರೀ ರಾಮ್

 

 22 ಜನವರಿ2024  ಅತ್ಯಂತ ಸುಂದರ ದಿನ ಧಾರ್ಮಿಕ ಮನಸ್ಥಿತಿಯನ್ನು ಹೊಂದಿದವರಿಗೆ.....  ಭಾರತದ ಇತಿಹಾಸದಲ್ಲಿ ಇಂತಹದ್ದೊಂದು ದಿನ ಬರುತ್ತದೆ.. ಈ ಕೆಲಸ ಸಾಧ್ಯ ಆಗುತ್ತದೆ ಎಂದು ಯಾರು  ತಿಳಿ ದಿರಲಿಲ್ಲ. ಕನ್ನಡದ ವಾಹಿನಿಗಳಾದ  ಏಷ್ಯಾನೆಟ್  ಸುವರ್ಣ , ಪಬ್ಲಿಕ್  ಟಿವಿ   ರಿಪಬ್ಲಿಕ್ ಕ  ನ್ನಡ  ಟಿವಿ ನೈನ್, ಟಿವಿ 5,ವಿಸ್ತಾರ .. ಹೀಗೆ ಕನ್ನಡ ಎಲ್ಲಾ  ವಾರ್ತಾ ವಾಹಿನಿಗಳು ತಮ್ಮದೇ ಆದ ಶೈಲಿಯಿಂದ ರಾಮ್ದೇವ್ನ ದರ್ಶನ ಮಾಡಿಸಿದ್ದು ನಿಜಕ್ಕೂ ಅವಿಸ್ಮರಣೀಯ. ಪಬ್ಲಿಕ್  ಟಿವಿ  ರಂಗಣ್ಣ, ಏಷ್ಯಾನೆಟ್ ಅಜಿತ, ರಿಪಬ್ಲಿಕ್  ಜಯಪ್ರಕಾಶ ಶೆಟ್ಟಿ ಸ್ವಲ್ಪ ಭಿನ್ನವಾಗಿ ಗಮನ ಸೆಳೆದರು.. ಶೆಟ್ರ ಉತ್ರ ಜಾಸ್ತಿ ವೈರಲ್ ಆಯ್ತು.. ಅದರ ಬಗ್ಗೆ ಹೆಚ್ಚು ವಿಸ್ತಾರಾ ಬೇಡ .. ಅದೇ ರೀತಿ ನಮ ರಂಗಣ್ಣ ಪಾದರಕ್ಷೆ ಇಲ್ಲದೆ  ರಾಮ ದೇವಳದ ಬಗ್ಗೆ ನೀಡಿದ ಮಾಹಿತಿಯ ಚಿತ್ರ ಸಹ.. ಅಜಿತ ಮತ್ತು ದೇವರ ..?! ನಡುವೆ ನಡೆದ ಚರ್ಚೆ .. ಇದು ಸಹ ....  

ಬಹುತ್ವಕ್ಕೆ ಭಾರತ ಹೆಸರುವಾಸಿ ಅದು ಇನ್ನುಮುಂದೆ ಇರಲ್ಲ, ರಾಮ್ ನಾಮ್ ಸತ್ಯ ಹಾಯ್ ಅನ್ನುವ ಮನಸ್ಥಿತಿ ಸಹ ಸಾಕಷ್ಟು ಹೊರ ಬಂತು.. ಬಹುತ್ವ ಅನ್ನುವುದು ಆರಂಭವಾಗುವುದೇ ಭಾರತದ ದೇಗುಲಗಳಲ್ಲಿ. ಇಲ್ಲಿ  ಯಾರು ಯಾವ ರೀತಿ  ಸೇವೆ, ಸಹಕಾರ ಉಪಯೋಗ, ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುವುದನ್ನು ಕೂಲಂಕಷವಾಗಿ ಗಮನಿಸಿದರೆ ತಿಳಿಯುತ್ತದೆ. ಆ ದೇವಳಕ್ಕೆ ನೀಡುವ ಹೂವು, ಅದನ್ನು ಬೆಳೆಯುವ ರೈತ, ಅದಕ್ಕೆ ಬಳಕೆ ಆಗುವ ಗೊಬ್ಬರ, ಕೀಟ ನಾಶಕ, ಅದನ್ನು ತಯಾರಿಸುವ ಫ್ಯಾಕ್ಟರಿ  ಹೂ  ಕಟ್ಟಲು ಬೇಕಾಗುವ  ದಾರ, ದಾರವನ್ನು ತಯಾರಿಸುವ ಕಾರ್ಖಾನೆ, ಅದನ್ನು ತಯಾರಿಸುವ ಕಾರ್ಮಿಕ, ಅದಕ್ಕೆ ಬಳಕೆ ಆಗುವ ಯಂತ್ರ, ಅದನ್ನು ನಿರ್ಮಿಸಿದ ಟೆಕ್ನಿಷಿಯನ್ ಅದು ಕೆಟ್ಟರೆ ಹಾಳಾದರೆ  ಅದರಿಂದ ದೊರಕುವ ಮೆಟಲ್, ಪ್ಲಾಸ್ಟಿಕ್ ನಂತಹ   ಈ ತ್ಯಾಜ್ಯ, ಬಳಸಿ ಅದನ್ನು ಪುರುರ್ತ್ಪತ್ತಿ ಮಾಡುವ ಕಬಾಡಿ, ಮತ್ತೆ ಅದು ಬೇರೆ ರೂಪದಲ್ಲಿ ಗ್ರಾಹಕರ ಕೈ ಸೇರುವ ವಿಧಾನ ಇವೆಲ್ಲವಕ್ಕೆ  ಒಂದಕ್ಕೊಂದು  ಲಿಂಕ್ ಇರುತ್ತದೆ. .. ಹೀಗೆ ಅಲ್ಲಿರುವ ಎಲ್ಲಾ ಅಂಶಗಳಿಗೂ ಅದರದ್ದೇ ಆದ ಕೊಂಡಿ ಇದೆ. ಇಲ್ಲಿ ಯಾರು ಕ್ರಿಶ್ಚಿಯನ್, ಯಾರು ಪಾರ್ಸಿ, ಯಾರು ಮುಸ್ಲಿಂ ಅನ್ನುವುದು ಗೊತ್ತಿರಲ್ಲ ಅದರ ಅದರ ಅಗತ್ಯ ಇರಲ್ಲ. ಬಹುತ್ವ ಇರಬೇಕಾಗಿರುವುದು ಇಂತಹ ಅಂಶಗಳಲ್ಲಿ ಬರೀ  ಪುಸ್ತಕದಲ್ಲಿ ಅಥವಾ ತಮ್ಮ ಬೇಳೆ  ಬೇಯಿಸಿಕೊಳ್ಳುವವರ ಮಾತುಗಳಲ್ಲಿ ಅಲ್ಲವೇ ಅಲ್ಲ.. ಜೈ ಶ್ರೀ ರಾಮ್ 

No comments: