ಖುಷಿ ಕೊಡ್ತು.

 

ನನಗಂತೂ ಬಾಲಕ ರಾಮ ಪ್ರಾಣ ಪ್ರತಿಷ್ಠಾಪನೆ ಸಖತ್  ರೋಮಾಂಚನ ನೀಡಿದೆ. ರಾಮನ ಮುದ್ದುಮೊಗ ಉಡುಪಿಯ ಕಿಟ್ಟಪ್ಪನ  ಮುದ್ದು ಮುಖದಂತೆ ಕಂಡಿದೆ ಮತ್ತು ಕಾಣಿಸ್ತಾ ಇದೆ. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳ ಸಮರ್ಥ ಹೋರಾಟದ ಫಲ  ಬಾಲಕ ರಾಮ ಕೃಷ್ಣನಂತೆ ಕಾಣುತ್ತಿರಬೇಕು. ಒಬ್ಬರಿಗೆ ಶ್ರೀನಿವಾಸ ಗೋವಿಂದ , ಒಂದಷ್ಟು ಮಂದಿಗೆ  ಶಂಭುಕುಮಾರ ವಡಿವೇಲ ಅಂದ್ರೆ ಬಾಲಸುಬ್ರಮಣ್ಯ ಸ್ವಾಮಿಯಂತೆ ಕಂಡು ಬರ್ತಾ ಇದ್ದಾರೆ ಅಂದ್ರೆ ಅನೇಕರೂಪ ಏಕದೇವ ಎನ್ನುವ ಅಂಶ  ಸ್ಪಷ್ಟವಾಗಿದೆ. ಜೈ ಶ್ರೀ ರಾಮ್  
 ಜೀ ಕನ್ನಡ ವಾಹಿನಿಯ ಸರಿಗಮಪ ಸೀಜನ್  20  ಸಂಕ್ರಾಂತಿ ಸಮಯದ ಎಪಿಸೋಡ್ ನಲ್ಲಿ ಅಯ್ಯಪ್ಪ ಸ್ವಾಮಿ ಹಾಡುಗಳು  ಖುಷಿ ಕೊಡ್ತು. ಚಿಕ್ಕಂದಿನಲ್ಲಿ ನಾವು ಅಯ್ಯಪ್ಪ ಸ್ವಾಮಿ ದೀಪ ಹೊತ್ತಿದ್ದೆ ಮೆರವಣಿಗೆ ಸಮಯದಲ್ಲಿ.. ಆಗ  ವೀರಮಣಿ ರಾಜು ಅವರು ಹಾಡಿರುವ ಪಳ್ಳಿಕಟ್ಟು  ಶಬರಿ  ಮಲೈ ಕ್ಕೂ ಕಲ್ಲುಮ  ಮುಳ್ಳುಮ  ಕಾಲುಕ್ಕು  ಮೆಥೈ ಸ್ವಾಮಿಯೇ  ಅಯ್ಯಪ್ಪೋ  ಅಯ್ಯಪ್ಪೋ  ಸ್ವಾಮಿಯೇ ನೆಯ್ಯ್ಯಭಿಷೇಕಂ  ಸ್ವಾಮಿಕ್ಕೆ ಕರ್ಪೂರ  ದೀಪಂ  ಸ್ವಾಮಿಕ್ಕೆ ತಪ್ಪದೆ ಕೇಳುತ್ತಾ ತಪ್ಪುತಪ್ಪಾಗಿ ತಮಿಳಿನಲ್ಲಿ ಹಾಡುತ್ತಾ ಸಾಗುತ್ತಿದ್ದೆವು    ವಿಜಯಪ್ರಕಾಶ ಅಲ್ಲದೆ  ಸ್ಪರ್ಧಿಗಳು ಅಯ್ಯಪ್ಪ ದೇವನ ಹಾಡು ಹಾಡಿ  ಮನಕ್ಕೆ ಮುದ ನೀಡಿದರು. ಕರ್ನಾಟಕದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಹೆಚ್ಚು.. ಅದೇರೀತಿ ಶ್ರೀರಾಮದೇವನ ಹಾಡು ಖುಷಿ ಕೊಡ್ತು. ಡಿವೋಷನಲ್, ಎಮೋಷನಲ್  ಹಾಡು .. ನಾವು ಸಹ ಬಾಲಕ ರಾಮ ಪ್ರಾಣಪ್ರತಿಷ್ಠಾಪನೆ ದಿನವಾದ ನಿನ್ನೆ ರಾಮದೇವನಿಗೆ ಪೂಜಿಸಿ ನಮ್ಮ ಮನೆಯಲ್ಲಿ ಹಾಡಿನ ಮೂಲಕ ಭಕ್ತಿ ಸಮರ್ಪಣೆ ಮಾಡಿದೆವು ಮಹಾಗುರು ಹಂಸಲೇಖ ಸರ್.. :-) 

No comments: