ಸ ರಿ ಗ ಮ ಪ - ಸೀಜನ್ ನಲ್ಲಿ ಹೊಸಹೊಸ ಅಂಶಗಳು ಮನ ಸೆಳೆಯುತ್ತಿವೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಹೇಳುತ್ತಿದ್ದ ರಾಕ್ಷಸ ಪ್ರತಿಭೆಗಳು ಎನ್ನುವ ಪದ ಇಲ್ಲಿ ಸೂಕ್ತ. ಡ್ರಮ್ ಅರುಣ್ (ಹಾಗೆನ್ನಬಹುದಾ ?) ಎಂಥ ಅಪರೂಪದ ಪ್ರತಿಭೆ. ಇಂಥವರಿಗೆ ಕೈಗೆ ಏನು ಸಿಕ್ಕರರು ಅವುಗಳಿಗೆ ಜೀವ ಕೊಡುವ ಶಕ್ತಿ ಬಹುಶಃ ದೇವರು ನೀಡಿರಬೇಕು. ಅವರ ವಾದ್ಯ ಸಂಗಾತಿಗಳು ಸಹ ಪ್ರತಿಭೆಯಲ್ಲಿ ಕಡಿಮೆ ಇಲ್ಲ.ಸಾಮಾನ್ಯವಾಗಿ ಹೊಸತನಕ್ಕಾಗಿ ವೀಕ್ಷಕ ತುಡಿಯುತ್ತಾನೆ. ಅಂತಹ ಹೊಸತನ ನೀಡುವ ಅಪ್ಪಟ ದೇಸಿ ಪ್ರತಿಭೆ ಇವರು.
ಈ ಕಾರ್ಯಕ್ರಮದ ಬಹು ಸಂಖ್ಯೆಯ ತೀರ್ಪುಗಾರರಜೊತೆಗೆ ಅವರ ಹೆಸರು ತೋರಿಸಿದರೆ ಒಳಿತು. ನಮ್ಮಂಥ ಅತಿ ಸಾಮಾನ್ಯ ವೀಕ್ಷಕರು ಅಡ್ಡ ಹೆಸರಿಂದ ಕರೆದು ನಮ್ಮ ಪ್ರತಿಭೆ ತೋರಿಸುತ್ತಿರುತ್ತೀವಿ. ಒಂದು ಸಂಗತಿ ಖುಷಿ ಅಂದರೆ ಈ ಮೊದಲು ತೀರ್ಪುಗಾರಾಗಿದ್ದ ನಂದಿತಾ ಅವರನ್ನು ಮೆಚ್ಚುಗೆ ಗಳಿಸಿ ಗೆದ್ದು ಅವರ ಜೊತೆ ತೀರ್ಪುಗಾರ್ತಿಯರಾಗಿ ಕುಳಿತುಕೊಳ್ಳುವ೦ತಹ ಸಾಧನೆ ಮಾಡಿರುವ ಲಕ್ಷ್ಮಿ ನಾಗರಾಜ್ ಮತ್ತು ಇಂದು ನಾಗರಾಜ್ , ಅತಿ ಮಧುರ ಕಂಠ ಸಿರಿಯ ಅನುರಾಧ ಭಟ್ , ಹೇಮಂತ್ ..ಬಹಳಷ್ಟು ಪ್ರತಿಭೆಗಳ ಹೆಸರು ಗೊತ್ತಿದೆ-ಗೊತ್ತಿಲ್ಲ...!
ಮಾಗಡಿಯಲ್ಲಿ ನಡೆದ ಡ್ರಾಮ ಜೂನಿಯರ್ಸ್ ಮತ್ತು ಸರಿಗಮಪ ಕಾರ್ಯಕ್ರಮದ ಮಿಶ್ರಣದಲ್ಲಿ ಶಿಶುನಾಳ ಷರೀಫ್ ಸಾಹೇಬರ ಒಂದು ಪುಟ್ಟ ನಾಟಕ ಮತ್ತು ರಚನೆ ಮನಕ್ಕೆ ಖುಷಿ ನೀಡಿತು. ಅಂದು ತಕ್ಷಣ ನಾನು ಶಿಶುನಾಳರ ಗೀತೆಯನ್ನು ನನ್ನ ಎಫ್ಭಿ ವಾಲ್ ನಲ್ಲಿ ಹಾಕಿ ಖುಷಿಪಟ್ಟೆ. ಈ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾದ ದರ್ಶನ್ ವಾಹ್ ಏನ್ ಪ್ರತಿಭೆ..ವಾಹ್
No comments:
Post a Comment